ಸೋಮವಾರ, ನವೆಂಬರ್ 25, 2013

ಖಾಲಿ ಕ್ವಾರ್ಟರ್ ಬಾಟಲಿ ಹಾಂಗೆ ಲೈಫು..!!!!!!

ಅವನು ನೋಡಲು ಕೆಟ್ಟವನಾಗಿರಬಹುದು, ಮನಸ್ಸಿಂದ ವಜ್ರ. ಅವನ ಆದರ್ಶ ವಿಚಾರಗಳಲ್ಲಿ ಏನೋ ಒಳ್ಳೆಯತನ ಅನ್ನೋ ಹಸಿವು ಕಾಣಿಸುತ್ತದೆ. ಪ್ರತಿ ಸರಿ ಅವನನ್ನ ಬೇಟಿ ಆದಾಗ ಒಂದೊಂದು ಹೊಸ ಕಥೆ ತೆರೆದುಕೊಳ್ಳುತ್ತದೆ.
ಅವನಿಗೆ ನನ್ನ ಮೇಲೆ ಅಪಾರ ನಂಬಿಕೆ. ಅವನಿಗೆ ಬೇಜಾರಾದಾಗೆಲ್ಲ ನನ್ನ ಕರೆಸಿಕೊಳ್ಳುತ್ತಾನೆ. ನನ್ನ ಹೆಗಲಿಗೆ ಒರಗಿ ತನ್ನ ಕಷ್ಟ, ಮಾಡಿದ ತಪ್ಪುಗಳನ್ನು ಹೇಳುತ್ತಾನೆ. ನನ್ನಿಂದ ಸಮಾಧಾನದ ಒತ್ತಾಸೆ ಬಯಸುತ್ತಾನೆ. ಪ್ರತಿ ಬಾರಿ ಅವನ ಕೊನೆಯ ಶಬ್ದಗಳು...."ಕ್ಷಮಿಸು ಕ್ಷಮಿಸು???" ಅನ್ನುವುದಾಗಿರುತ್ತದೆ. ನನ್ನಲ್ಲಿ ಪ್ರಶ್ನೆಗಳನ್ನು ಬಿಟ್ಟು ಮತ್ತೆ ನಿನಗೆ ಸಿಗಲ್ಲ ಅಂತ ಹೇಳಿ ಹೊರಟು ಹೋಗುತ್ತಾನೆ....ಅವನು ಹೊರಡುವಾಗ ಇಬ್ಬರ ಮುಖದಲ್ಲೂ ನಗುವಿರುತ್ತದೆ.
ಅವನು ಮತ್ತೆ ಸಿಗದಿರಲಿ, ತಪ್ಪು ಮಾಡದಿರಲಿ, ಖುಷಿಯಾಗಿರಲಿ ಅಂತ ಪ್ರತಿ ಬಾರಿ goodbye ಹೇಳುತ್ತದೆ ಮನಸ್ಸು. ಆದರೂ ಎಲ್ಲೋ ಮನದ ಮೂಲೆಯಲ್ಲಿ ತಳಮಳ. ಅವನು ಬಂದೆ ಬರುತ್ತಾನೆ ಅನ್ನೋ ನಂಬಿಕೆ... ಈ ದುಗುಡ, ದ್ವಂದ್ವಗಳಲ್ಲಿ ಅವನ ಕೊನೆಯ ಹೆಜ್ಜೆ ಅಳಸಿ ಮರೆಯಾಗುತ್ತದೆ ಎಂದಿನಂತೆ.
ಅವನು ವಿಚಿತ್ರ. ಕಾಣದ ಕನಸುಗಳಿಲ್ಲ. ಆಡದ ಮಾತುಗಳಿಲ್ಲ. ನಂಬಿಕೆ ಅನ್ನೋ ಪದದ ಒಳಾರ್ಥ ಅವನಾಗಿರಬೇಕು. ಅವನ ಯೋಚನೆಗಳು ಅಚಲ. ಚದುರಂಗದ ಕಾಯಿಗಳಂತೆ ಅವನ ನಡೆ. ಪ್ರತಿ ನಡೆಯಲ್ಲೂ ಹೊಸ ಆವಿಷ್ಕಾರ, ಹೊಸ ವಿಚಾರ , ಹೊಸ ಭರವಸೆಗಳನ್ನ ತುಂಬಿಕೊಂಡು ನಡೆಯುವ ದಾರಿಯಲ್ಲಿ ತಪ್ಪು ಮಾಡುವುದು ವಿರಳ....ಆ ತಪ್ಪುಗಳೇ ನಮ್ಮ ಬೇಟಿಯ ಆಮಂತ್ರಣ.....ಬೇಟಿಗಳ ದೂರ ನಮ್ಮ ವಯಸ್ಸಿನಂತೆ ಬೆಳೆಯತೊಡಗಿತು. ಎಷ್ಟೋ ತಿಂಗಳುಗಳ ಮೇಲೆ ಮೊನ್ನೆ ಅವನ ಕರೆ ಬಂತು.
ಅವನ ಮಾತುಗಳಲ್ಲಿ ಅವನ ಮುಖ ಗುರುತಿಸಿದ ನಾನು...ಕೇಳುವ ಪ್ರಶ್ನೆಗೆ ಅವನು ಮೊದಲೇ ಉತ್ತರಿಸಿದ.
"ಜೀತು, ಒಬ್ಬನೇ ಬಂದು ಬಾರಿನಲ್ಲಿ ಕುಡಿಯಬೇಕು ಅಂದಾಗ ನೀನೇ ಕಣ್ಮುಂದೆ ಬರ್ತೀಯಾ.... ಪೆಗ್ ರೆಡೀ ಇದೆ. ಕುಡಿಯಕ್ಕೆ ಆಗ್ತಿಲ್ಲ....ನಿನಗೆ ಕೊಟ್ಟ ಮಾತಿನಲ್ಲಿ ತೂಕವಿದೆ ಗೆಳೆಯ...ಬರ್ತೀಯಾ????"
ಸರಿ ಬರ್ತಿದಿನಿ ಅಂತ ಹೇಳಿ ಹೊರಟಾಗ ನಾನು ಹೇಳಿದ ಮಾತುಗಳು ನೆನಪಾದವು.
ಗೆಳೆಯರೆಲ್ಲ ಜೊತೆಯಾದಾಗ ಕೂಡಿದ ಅಮಲಿನಲ್ಲಿ ಮಾತಿಗೆ ಹೇಳಿದ ಮಾತುಗಳು ಅವು. "ಜಗತ್ತಿನಲ್ಲಿ ಯಾರೂ ಒಬ್ಬಂಟಿಯಲ್ಲ, ನಿಮಗೆ ಆ ತರ ಅನಿಸಿದಾಗ, everything ಈಸ್ over ಅಂತ ಅನಿಸಿದಾಗ , ಒಬ್ಬನೇ ಕುಳಿತು ಕುಡಿಯಬೇಕು ಅನಿಸಿದಾಗ ಈ VJ ನಾ ನೆನಪು ಮಾಡ್ಕೊಳಿ. ಸ್ಮಶಾನದಲ್ಲಿ ಹೂತಿದ್ರು ಎದ್ದು ಬರ್ತೀನಿ ..." ಅನ್ನೊ ಮಾತನ್ನ ನಮ್ಮ ಗೆಳೆಯ ಸೀರೀಯಸ್ ಆಗಿ ತಗೊಂಡಿದ್ದ. ನಾನು ಹೇಳಿದ ಮಾತುಗಳಲ್ಲಿ ನನ್ನ ಮನದ ಕನ್ನಡಿ ಇತ್ತು. ಅದರಲ್ಲಿ ಇಣುಕಿ ತನ್ನ ಮುಖ ನೋಡಿದವನು ಇವನೊಬ್ಬನೇ ಅನಿಸುತ್ತದೆ.
ಅವನು ಕಲಾವಿದ, ಹುಟ್ಟಿನಿಂದಲ್ಲ. ಪ್ರೀತಿಯ ಆಳ ಹುಡುಕಲು ಹೋಗಿ ಪ್ರೀತಿಸಿ ಕಲಾವಿದನಾದವನು.ಅವನು ನನ್ನಾಕೆಯನ್ನು ಪ್ರೀತಿಸಿದ. ನಾನು ಅವರಿಬ್ಬರ ಪ್ರೀತಿಯನ್ನು ಪ್ರೀತಿಸಿದ್ದೆ :) ಅದು ಇಬ್ಬರಿಗೂ ಗೊತ್ತಿಲ್ಲ ಇಂದಿಗೂ.... ಅವನಾಕೆ ಅವನ ಕಲೆಯನ್ನ ಪ್ರೀತಿಸಿದಳು. ಅವನು ಗೀಚಿದ್ದು ಅಳಿಸದ ಕವಿತೆಗಳಾಗಿದ್ದವು. ಬರೆದ ಚಿತ್ರಗಳು ಅಳಿಸಿದ ಮೇಲೆ ಮೂಡಿದಂತಾಗಿದ್ದವು. ಕೊನೆಯ ಬೇಟಿಯ ವರೆಗೂ ಅವನ ಪ್ರೀತಿ ವಿಚಾರದಲಿ ಯಾವುದೇ ತೊಂದರೆ ಇರಲಿಲ್ಲ. ಈ ಬಾರಿಯೂ ಅದಾಗದಿರಲಿ ಅಂತ ಮನಸ್ಸಿನಲ್ಲಿ ಆಶಿಸಿ ಆ ಬಾರ್ ನಾ ಒಳಗಡೆ ಹೊರಟೆ.
ಹೇಯ್, ಹೇಗಿದಿಯೋ??? ಅಂತ ನನ್ನ ಪ್ರಶ್ನೆಗೆ ಬಿಗಿಯಪ್ಪುಗೆ ಉಡುಗೊರೆ.
ಥ್ಯಾಂಕ್ಸ್ ಕಣೋ ಜೀತು....ತುಂಬಾ ದಿನ ಆದ್ಮೇಲೆ ಸಿಕ್ಕ್ತಿದೀವಿ. ಏನು ತಗೋತಿಯ??? ತುಂಬಾ ಮಾತಾಡೋದ್ ಇದೆ ನಿನ್ನ ಹತ್ತಿರ. ಅಂದ.
ಅದೆಲ್ಲ ಆಮೇಲೆ ಮೊದಲು ವಿಷಯಕ್ಕೆ ಬಾ....ಏನಾಯ್ತು???? ಅಂದೆ
ಎಲ್ಲ ಹೇಳ್ತೀನಿ...ಕೂತ್ಕೊ ಅಂತ ಹೇಳಿ..ಮಾಡಿ ಇಟ್ಟಿದ್ದ ಪೆಗ್ ನಾ ಒಂದೇ ಸಾರಿ ಗಂಟಲಿಗೆ ಇಳಿಸಿದ....
ಅವಳು ನನ್ನ ಬಿಟ್ಟು ಹೊರಟು ಹೋದಳು ಜೀತು...ಅಂತ ಅಳಕ್ಕೆ ಶುರು ಮಾಡಿದ.
ನನ್ನ ಯೋಚನೆಗಳು ನಿಜವಾಗಿತ್ತು.
ಏನಕ್ಕೋ??? ಏನಾಯಿತು?? ಅಂತ ಕೇಳಿದೆ.
ಏನಕ್ಕೋ ಏನೋ ಕಾರಣ ಕೊಡದೆ ಹೊರಟು ಹೋದಳು. ಎಲ್ಲ ಕಡೆ ಹುಡುಕಿದೆ. ಎಲ್ಲೂ ಸಿಕ್ಕಿಲ್ಲ.
ನಾವಿಬ್ಬರೂ ಜೊತೆಯಾಗಿದ್ದರೆ ಇಬ್ಬರು ಖುಷಿಯಾಗಿರಲ್ಲ. ಅಂತ ನನ್ನ ಅವಳ ನಡುವೆ ಇರುವ ವ್ಯತ್ಯಾಸಗಳ ಒಂದು ಪುಸ್ತಕ ಬರೆದು ಓದಲು ಕೊಟ್ಟು ಮರೆಯಾದವಳು, ಇನ್ನೂ ಹಿಂತಿರುಗಿ ನೋಡಿಲ್ಲ...
ಅವಳಿಲ್ಲದೆ ನನಗೆ ಉಸಿರೇ ಇಲ್ಲ...ಹೇಗೆ ಬದುಕಲಿ ನಾನು??? ಅವಳ ಮಾತುಗಳಲ್ಲಿ ಅವಳಿರದೆ ನಾನು ಬದುಕುವ ಕನಸಿದೆ. ಅದು ಅಸಾದ್ಯ ಅನ್ನುವುದು ನನಗೆ ಗೊತ್ತು.
result ಬರದ exam ಬರೆಯೋದರಲ್ಲಿ ಏನು ಅರ್ಥ ಜೀತು???
ಏನು ಮಾಡಲಿ ಅಂತ ಗೊತ್ತಾಗ್ತಿಲ್ಲ....ಬದುಕಿಗೆ ಅರ್ಥ ಇಲ್ಲ ಅಂತ ಅನಿಸುತ್ತದೆ ಒಮ್ಮೊಮ್ಮೆ.
ಆ ಸಮಸ್ಯೆಗೆ ನನ್ನ ಬಳಿ ಉತ್ತರವಿತ್ತು.
ಅವನಿಗೆ ಹೇಳಿದೆ "ಗೆಳೆಯ ನೀನು ಅವಳನ್ನ ಎಷ್ಟು ಪ್ರೀತಿಸುತ್ತೀಯಾ ಅಂತ ನನಗೆ ಗೊತ್ತು.
ಅವಳು ಅದಕ್ಕಿಂತ ಹೆಚ್ಚಾಗಿ ನಿನ್ನ ಇಷ್ಟ ಪಡುತ್ತಾಳೆ. ಅವಳು ಎಲ್ಲಿಗೂ ಹೋಗಲ್ಲ...ನಿನ್ನ ಬಿಟ್ಟು ಅವಳು ಇರಲು ಸಾಧ್ಯವಿಲ್ಲ...
ನಿನ್ನ ಹುಡುಗಿಯಾಗುವ ಮೊದಲು ಅವಳು ನನ್ನ ಸ್ನೇಹಿತೆ. ಅವಳು ಯಾವ ತರ ಅಂತ ನನಗೆ ಚೆನ್ನಾಗಿ ಗೊತ್ತು.
ಎಲ್ಲೋ ಹೋಗಿ ದೂರದಲ್ಲಿ ನಿನ್ನ ನೆನಪಿಸಿಕೊಂಡು ಅಳುತ್ತಿರುತ್ತಾಳೆ, ಇಲ್ಲ ಅಂದ್ರೆ ಯಾವುದಾದರೂ ಆಶ್ರಮಕ್ಕೆ ಹೋಗಿ ಮಕ್ಕಳ ಜೊತೆ ಒಂದಾಗಿ ಮಕ್ಕಳಂತೆ ಆಡುತ್ತಿರುತ್ತಾಳೆ. "
ನನ್ನ ಮಾತನ್ನು  ಕೇಳಿ ಅವನು ನಗುತ್ತಿದ್ದ. "ಗೂಬೆ ನನ್ನ ಮಗಳು ಅವ್ಳು...ಅಂದ".
ನಾನು ತುಂಬಾ ತಪ್ಪು ಮಾಡಿದೀನಿ. ಅವಳಿಗೆ ಅದರ ಸುಳಿವು ಇಲ್ಲ. ಎಲ್ಲ ಬಿಟ್ಟು ಒಳ್ಳೆಯವನಾಗಿರ್ತೀನಿ. ಒಂದು ಸರಿ ಅವಳು ಬಂದರೆ ಸಾಕು ...ಅಂತ ಮತ್ತೆ ಕುಡಿಯಕೆ ಶುರು ಮಾಡಿದ.
ಅವನ ಹುಡುಗಿ ನನ್ನ ಜೊತೆ ಬೆಳೆದ ನನ್ನ ಬಾಲ್ಯ ಸ್ನೇಹಿತೆ. ಒಂತರಾ ಮಜಾ ಇದಾಳೆ. ಮಕ್ಕಳ ತರ ಯೋಚನೆ ಮಾಡ್ತಾಳೆ. ಜಗಳ ಮಾಡ್ತಾಳೆ. ಏನೇನೋ...ಇವನನ್ನ ಬಿಟ್ಟು ಎಲ್ಲಿಗೂ ಹೋಗಲ್ಲ ಅವಳು. ನನಗೆ ಗೊತ್ತು...ಅದು ಅವನಿಗೂ ಗೊತ್ತು...
ಆದರೂ ಈ ಡವ್ ಗಳು.
ಕುಡಿದಿದ್ದು ಸಾಕು ಬಾ.. ಅವಳು ಬರ್ತಾಳೆ ಮನೆಗ್ ಹೋಗಣ ಅಂತ ಹೇಳಿ ಅವನನ್ನು ಮನೆಗೆ ಬಿಟ್ಟು, ನಾನು ಮನೆಗೆ ಬಂದು ಮಲಗಿದೆ.
ಮತ್ತೆ ಅವನನ್ನ ಸಮಾಧಾನ ಮಾಡಲು ಫೋನ್ ಮಾಡಿ 2 ಘಂಟೆ ಮಾತಾಡಿದೆ....
ನಿದ್ದೆ ಬಂತು...
ಬೆಳಿಗ್ಗೆ ಬೆಳಿಗ್ಗೆ unknown ನಂಬರ್ ಇಂದ ಫೋನ್ ಕಾಲ್...
ಎತ್ತಿದ ತಕ್ಷಣ firing "ಲೋ ಗೂಬೆ,ಡಬ್ಬಾ VJ, ನೀನು ಕುಡಿದು ಹಾಳು ಆಗೋದಲ್ಲದೇ ನನ್ನ ಹುಡುಗನ್ನ ಕುಡಿಸಿ ದಾರಿ ತಪ್ಪಿಸ್ತಿದಿಯಾ?...ಇದೆ ಕಣೋ ನಿನಗೆ ಹಬ್ಬ... ಬಾ ಮನೆಗೆ ..." ಅಂತ ಆವಾಜ್ ಗಳು.
ಆ ನನ್ಮಗ ಹೀರೊ ತರ ಅವಳ ಪಕ್ಕ ನಿಂತು ನಗುತ್ತಿರುವುದು ನನಗೆ ಕೇಳಿಸುತಿತ್ತು.
ಆದರೂ ಈ ಹುಡಗಿಯರನ್ನ ಅರ್ಥ ಮಾಡ್ಕೊಳಕ್ಕೆ ಆಗಲ್ಲ.....
"ಎಲ್ಲಿ ಸಾಯಕ್ಕೆ ಹೋಗಿದ್ದೆ???? ಬಂದೆ ಇರು ಅಂತ ಹೇಳಿ ಫೋನ್ ಕಟ್ ಮಾಡ್ದೆ."
ಇವರ ಸಹವಾಸ ಬೇಕಾ ಗುರು???? ಅಂತ ಹೇಳಿ ನನ್ನ ತಲೆ ಚೆಚ್ಚಿಕೊಂಡೆ....
ಹುಡಗೀರು ಅರ್ಥ ಆಗಲ್ಲ ಗುರು....!!! ನೀವು ಒಬ್ಬ ಹುಡುಗೀನ complete ಆಗಿ ಅರ್ಥ ಮಾಡ್ಕೊಂಡಿದೀರಾ ಅಂದ್ರೆ IAS exam ಆರಾಮಾಗಿ clear ಮಾಡಬಹುದು ಅನ್ನೋದು ನಮ್ಮ ಅನಿಸಿಕೆ.... :P ಏನಂತೀರಾ??? ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ